ವಿವೇಕ ಚೂಡಾಮಣಿ - 81-100
ವಿಷಮವಿಷಯಮಾರ್ಗೈರ್ಗಚ್ಛತೋಽನಚ್ಛಬುದ್ಧೇಃ ಪ್ರತಿಪದಮಭಿಯಾತೋ ಮೃತ್ಯುರಪ್ಯೇಷ ವಿದ್ಧಿ . ಹಿತಸುಜನಗುರೂಕ್ತ್ಯಾ ಗಚ್ಛತಃ ಸ್ವಸ್ಯ ಯುಕ್ತ್ಯಾ ಪ್ರಭವತಿ ಫಲಸಿದ್ಧಿಃ ಸತ್ಯಮಿತ್ಯೇವ ವಿದ್ಧಿ .. 81.. ತಪ್ಪು ದಾರಿಯಲ್ಲಿ ಹೋಗುತ್ತಿರುವ ಮಲಿನ ಬುದ್ಧಿಯವನನ್ನು ಮೃತ್ಯುವು ಸದಾ ಹಿಂಬಾಲಿಸುತ್ತಿರುತ್ತದೆ - ಇದನ್ನು ತಿಳಿದುಕೋ. ಒಳ್ಳೇ ಜನರ ಮತ್ತು ಗುರುವಿನ ಹಿತನುಡಿಯಂತೆ ಮತ್ತು ಸ್ವಂತ ಯುಕ್ತಿಯಂತೆ ನಡೆಯುವನಿಗೆ ಫಲ ಪ್ರಾಪ್ತಿಯಾಗುತ್ತದೆ- ಇದನ್ನೂ ತಿಳಿದುಕೋ. ಮೋಕ್ಷಸ್ಯ ಕಾಂಕ್ಷಾ ಯದಿ ವೈ ತವಾಸ್ತಿ ತ್ಯಜಾತಿದೂರಾದ್ವಿಷಯಾನ್ವಿಷಂ ಯಥಾ . ಪೀಯೂಷವತ್ತೋಷದಯಾಕ್ಷಮಾರ್ಜವ- ಪ್ರಶಾಂತಿದಾಂತೀರ್ಭಜ ನಿತ್ಯಮಾದರಾತ್ .. 82.. ನಿನಗೆ ಮೋಕ್ಷದ ಆಸೆಯಿದ್ದರೆ, ಇಂದ್ರಿಯ ಸುಖ ವನ್ನು, ವಿಷದಂತೆ ದೂರವಿಡು. ಯಾವಾಗಲೂ ಅಮೃತದಂತಹ- ಸಂತೋಷ, ದಯೆ, ಕ್ಷಮೆ, ಸರಳತೆ, ದಮ, ಶಮ ಈ ಗುಣಗಳನ್ನು ನಿತ್ಯವೂ ಜತನದಿಂದ ಬೆಳೆಸಿಕೋ. ಅನುಕ್ಷಣಂ ಯತ್ಪರಿಹೃತ್ಯ ಕೃತ್ಯಂ ಅನಾದ್ಯವಿದ್ಯಾಕೃತಬಂಧಮೋಕ್ಷಣಂ . ದೇಹಃ ಪರಾರ್ಥೋಽಯಮಮುಷ್ಯ ಪೋಷಣೇ ಯಃ ಸಜ್ಜತೇ ಸ ಸ್ವಮನೇನ ಹಂತಿ .. 83.. ಯಾರು, ಪ್ರತಿ ಕ್ಷಣವೂ ಮಾಡಬೇಕಾದ, ಮೌಢ್ಯದ ಬಂಧನದಿಂದ ವಿಮೋಚನೆ...