ವಿವೇಕ ಚೂಡಾಮಣಿ - 81-100
ಪ್ರತಿಪದಮಭಿಯಾತೋ ಮೃತ್ಯುರಪ್ಯೇಷ ವಿದ್ಧಿ .
ಹಿತಸುಜನಗುರೂಕ್ತ್ಯಾ ಗಚ್ಛತಃ ಸ್ವಸ್ಯ ಯುಕ್ತ್ಯಾ
ಪ್ರಭವತಿ ಫಲಸಿದ್ಧಿಃ ಸತ್ಯಮಿತ್ಯೇವ ವಿದ್ಧಿ .. 81..
ತ್ಯಜಾತಿದೂರಾದ್ವಿಷಯಾನ್ವಿಷಂ ಯಥಾ .
ಪೀಯೂಷವತ್ತೋಷದಯಾಕ್ಷಮಾರ್ಜವ-
ಪ್ರಶಾಂತಿದಾಂತೀರ್ಭಜ ನಿತ್ಯಮಾದರಾತ್ .. 82..
ನಿನಗೆ ಮೋಕ್ಷದ ಆಸೆಯಿದ್ದರೆ, ಇಂದ್ರಿಯ ಸುಖವನ್ನು, ವಿಷದಂತೆ ದೂರವಿಡು. ಯಾವಾಗಲೂ ಅಮೃತದಂತಹ- ಸಂತೋಷ, ದಯೆ, ಕ್ಷಮೆ, ಸರಳತೆ, ದಮ, ಶಮ ಈ ಗುಣಗಳನ್ನು ನಿತ್ಯವೂ ಜತನದಿಂದ ಬೆಳೆಸಿಕೋ.
ಅನಾದ್ಯವಿದ್ಯಾಕೃತಬಂಧಮೋಕ್ಷಣಂ .
ದೇಹಃ ಪರಾರ್ಥೋಽಯಮಮುಷ್ಯ ಪೋಷಣೇ
ಯಃ ಸಜ್ಜತೇ ಸ ಸ್ವಮನೇನ ಹಂತಿ .. 83..
ಯಾರು, ಪ್ರತಿ ಕ್ಷಣವೂ ಮಾಡಬೇಕಾದ, ಮೌಢ್ಯದ ಬಂಧನದಿಂದ ವಿಮೋಚನೆ ಪಡೆಯುವ ಪ್ರಯತ್ನವನ್ನು ಮಾಡದೆ, ದೇಹದ (ಸತ್ತ ಮೇಲೆ ನಾಯಿ-ನರಿಗಳಿಗೆ ಆಹಾರವಾಗುವ ದೇಹದ) ಪೋಷಣೆಯಲ್ಲಿ ಆಸಕ್ತನಾಗಿರುತ್ತಾನೋ, ಅವನು ಸ್ವತ: ತನ್ನನ್ನು ತಾನೇ ಕೊಲ್ಲುತ್ತಾನೆ.
ಶರೀರಪೋಷಣಾರ್ಥೀ ಸನ್ ಯ ಆತ್ಮಾನಂ ದಿದೃಕ್ಷತಿ .
ಗ್ರಾಹಂ ದಾರುಧಿಯಾ ಧೃತ್ವಾ ನದೀಂ ತರ್ತುಂ ಸ ಗಚ್ಛತಿ .. 84.
ಯಾರು
ಆತ್ಮ ಜ್ಞಾನ ಪಡೆಯಲು ಶರೀರದ ಪೋಷಣೆಯನ್ನು ಮಾಡುತ್ತಾನೊ, ಅವನು ನದಿಯನ್ನು
ದಾಟಲು ಮರದ ಕುಂಟೆಯೆಂದು ತಪ್ಪಾಗಿ ತಿಳಿದು ಮೊಸಳೆಯನ್ನು ಹಿಡಿದುಕೊಂಡವನಂತೆ, ಕಷ್ಟದಲ್ಲಿ
ಸಿಲುಕುತ್ತಾನೆ.
ಮೋಹ ಏವ ಮಹಾಮೃತ್ಯುರ್ಮುಮುಕ್ಷೋರ್ವಪುರಾದಿಷು .
ಮೋಹೋ ವಿನಿರ್ಜಿತೋ ಯೇನ ಸ ಮುಕ್ತಿಪದಮರ್ಹತಿ .. 85..ಮೋಹಂ ಜಹಿ ಮಹಾಮೃತ್ಯುಂ ದೇಹದಾರಸುತಾದಿಷು .
ಯಂ ಜಿತ್ವಾ ಮುನಯೋ ಯಾಂತಿ ತದ್ವಿಷ್ಣೋಃ ಪರಮಂ ಪದಂ .. 86..
ದೇಹ, ಹೆಂಡತಿ, ಮಕ್ಕಳು ಇವುಗಳ ಮೇಲಿನ ಮೋಹ ಎಂಬ ಮಹಾಮೃತ್ಯುವನ್ನು ಗೆಲ್ಲು. ಈ ಮೋಹವನ್ನು ಗೆದ್ದ ಮುನಿಗಳು ವಿಷ್ಣುವಿನ ಪರಮ ಪದವನ್ನು ಹೊಂದುತ್ತಾರೆ.
ತ್ವಙ್ಮಾಂಸರುಧಿರಸ್ನಾಯುಮೇದೋಮಜ್ಜಾಸ್ಥಿಸಂಕುಲಂ .
ಪೂರ್ಣಂ ಮೂತ್ರಪುರೀಷಾಭ್ಯಾಂ ಸ್ಥೂಲಂ ನಿಂದ್ಯಮಿದಂ ವಪುಃ .. 87..
ಸಮುತ್ಪನ್ನಮಿದಂ ಸ್ಥೂಲಂ ಭೋಗಾಯತನಮಾತ್ಮನಃ .
ಈ
ಸ್ಥೂಲ ಶರೀರವು ಪೂರ್ವಜನ್ಮದ ಕರ್ಮದಿಂದ, ಪಂಚ ಭೂತಗಳ ಸಮ್ಮಿಲನದಿಂದ ಉತ್ಪನ್ನವಾಗಿದೆ ಹಾಗೂ ಇದು ಆತ್ಮವು ಅನುಭವಿಸುವ ಮಾಧ್ಯಮವಾಗಿದೆ. ಈ ಶರೀರ ಜಾಗ್ರತಾವಸ್ಥೆಯಲ್ಲಿ ಸ್ಥೂಲ ವಸ್ತುಗಳನ್ನು ಅನುಭವಿಸುತ್ತದೆ.
ಬಾಹ್ಯೇಂದ್ರಿಯೈಃ ಸ್ಥೂಲಪದಾರ್ಥಸೇವಾಂ
ಸ್ರಕ್ಚಂದನಸ್ತ್ರ್ಯಾದಿವಿಚಿತ್ರರೂಪಾಂ .
ಕರೋತಿ ಜೀವಃ ಸ್ವಯಮೇತದಾತ್ಮನಾ
ತಸ್ಮಾತ್ಪ್ರಶಸ್ತಿರ್ವಪುಷೋಽಸ್ಯ ಜಾಗರೇ .. 89..
ಸ್ಥೂಲಸ್ಯ ಸಂಭವಜರಾಮರಣಾನಿ ಧರ್ಮಾಃ
ಸ್ಥೌಲ್ಯಾದಯೋ ಬಹುವಿಧಾಃ ಶಿಶುತಾದ್ಯವಸ್ಥಾಃ .
ವರ್ಣಾಶ್ರಮಾದಿನಿಯಮಾ ಬಹುಧಾಽಽಮಯಾಃ ಸ್ಯುಃ
ಪೂಜಾವಮಾನಬಹುಮಾನಮುಖಾ ವಿಶೇಷಾಃ .. 91..
ಬುದ್ಧೀಂದ್ರಿಯಾಣಿ ಶ್ರವಣಂ ತ್ವಗಕ್ಷಿ
ಘ್ರಾಣಂ ಚ ಜಿಹ್ವಾ ವಿಷಯಾವಬೋಧನಾತ್ .
ವಾಕ್ಪಾಣಿಪಾದಾ ಗುದಮಪ್ಯುಪಸ್ಥಃ
ಕರ್ಮೇಂದ್ರಿಯಾಣಿ ಪ್ರವಣೇನ ಕರ್ಮಸು .. 92..
ಕಿವಿ,ಚರ್ಮ, ಕಣ್ಣು, ಮೂಗು ಇವುಗಳು ಜ್ಞಾನೇಂದ್ರಿಯಗಳು, ಯಾಕೆಂದರೆ ಇವು ವಿಷಯಗಳನ್ನು ಅರಿಯಲು ಸಹಾಯ ಮಾಡುತ್ತವೆ. ಬಾಯಿ, ಕೈ, ಕಾಲು, ಗುದ ಇತ್ಯಾದಿಗಳು ಕೆಲಸ ಮಾಡುವ ಕರ್ಮೇಂದ್ರಿಯಗಳು.
ನಿಗದ್ಯತೇಽನ್ತಃಕರಣಂ ಮನೋಧೀಃ
ಅಹಂಕೃತಿಶ್ಚಿತ್ತಮಿತಿ ಸ್ವವೃತ್ತಿಭಿಃ .
ಮನಸ್ತು ಸಂಕಲ್ಪವಿಕಲ್ಪನಾದಿಭಿಃ
ಬುದ್ಧಿಃ ಪದಾರ್ಥಾಧ್ಯವಸಾಯಧರ್ಮತಃ .. 93..
ಅತ್ರಾಭಿಮಾನಾದಹಮಿತ್ಯಹಂಕೃತಿಃ .
ಸ್ವಾರ್ಥಾನುಸಂಧಾನಗುಣೇನ ಚಿತ್ತಂ .. 94..
ಅಂತಃಕರಣವು
ತನ್ನ ವೃತ್ತಿಗನುಗುಣವಾಗಿ ಮನಸ್ಸು, ಬುದ್ದಿ, ಅಹಂಕಾರ ಅಥವಾ ಚಿತ್ತ ಎಂದು
ಕರೆಯಿಸಿಕೊಳ್ಳುತ್ತದೆ. -ಸಂಕಲ್ಪ - ವಿಕಲ್ಪಗಳನ್ನು ಗುರುತಿಸುವದರಿಂದ ಮನಸ್ಸು,
ವಸ್ತುಗಳ ಸತ್ಯವನ್ನು ನಿರ್ಧರಿಸುವದರಿಂದ ಬುದ್ದಿ, ಶರೀರವನ್ನು ತಾನು ಎಂದು ನಂಬುವದರಿಂದ
ಅಹಂಕಾರ, ಸ್ವ-ಸುಖ ಸಾಧನಗಳನ್ನು ಕುರಿತು ಚಿಂತಿಸುವದರಿಂದ ಚಿತ್ತ.
ಪ್ರಾಣಾಪಾನವ್ಯಾನೋದಾನಸಮಾನಾ ಭವತ್ಯಸೌ ಪ್ರಾಣಃ .
ಸ್ವಯಮೇವ ವೃತ್ತಿಭೇದಾದ್ವಿಕೃತಿಭೇದಾತ್ಸುವರ್ಣಸಲಿಲಾದಿವತ್ .. 95..
ಸುವರ್ಣ ಮತ್ತು ನೀರು ಇತ್ಯಾದಿಗಳು ಬೇರೆ ಬೇರೆ ರೂಪ ಧರಿಸುವಂತೆ, ಒಂದೇ ಪ್ರಾಣ ಕೂಡ ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಈ ರೂಪಗಳನ್ನು ಧರಿಸುತ್ತದೆ.
ವಾಗಾದಿ ಪಂಚ ಶ್ರವಣಾದಿ ಪಂಚ
ಪ್ರಾಣಾದಿ ಪಂಚಾಭ್ರಮುಖಾನಿ ಪಂಚ .
ಬುದ್ಧ್ಯಾದ್ಯವಿದ್ಯಾಪಿ ಚ ಕಾಮಕರ್ಮಣೀ
ಪುರ್ಯಷ್ಟಕಂ ಸೂಕ್ಷ್ಮಶರೀರಮಾಹುಃ .. 96..
ವಾಕ್ ಇತ್ಯಾದಿ ಕರ್ಮೇಂದ್ರಿಯಗಳು, ಕಿವಿ ಇತ್ಯಾದಿ ಜ್ಞಾನೇಂದ್ರಿಯಗಳು, ಪಂಚಪ್ರಾಣಗಳು, ಆಕಾಶ ಇತ್ಯಾದಿ ಪಂಚಭೂತಗಳು, ಬುದ್ದಿ ಇತ್ಯಾದಿ, ಅವಿದ್ಯಾ ಇತ್ಯಾದಿ, ಕಾಮ ಮತ್ತು ಕರ್ಮ ಈ ಎಂಟು "ಪುರ"ಗಳನ್ನು ಸೇರಿಸಿ ಸೂಕ್ಷ್ಮ ಶರೀರ ಎನ್ನುತ್ತಾರೆ.
ಲಿಂಗಂ ತ್ವಪಂಚೀಕೃತಭೂತಸಂಭವಂ .
ಸವಾಸನಂ ಕರ್ಮಫಲಾನುಭಾವಕಂ
ಸ್ವಾಜ್ಞಾನತೋಽನಾದಿರುಪಾಧಿರಾತ್ಮನಃ .. 97..
ಸ್ವಪ್ನೋ ಭವತ್ಯಸ್ಯ ವಿಭಕ್ತ್ಯವಸ್ಥಾ
ಸ್ವಮಾತ್ರಶೇಷೇಣ ವಿಭಾತಿ ಯತ್ರ .
ಸ್ವಪ್ನೇ ತು ಬುದ್ಧಿಃ ಸ್ವಯಮೇವ ಜಾಗ್ರತ್
ಕಾಲೀನನಾನಾವಿಧವಾಸನಾಭಿಃ .. 98..
ಕರ್ತ್ರಾದಿಭಾವಂ ಪ್ರತಿಪದ್ಯ ರಾಜತೇ
ಯತ್ರ ಸ್ವಯಂ ಭಾತಿ ಹ್ಯಯಂ ಪರಾತ್ಮಾ .
ಧೀಮಾತ್ರಕೋಪಾಧಿರಶೇಷಸಾಕ್ಷೀ
ನ ಲಿಪ್ಯತೇ ತತ್ಕೃತಕರ್ಮಲೇಶೈಃ .
ಯಸ್ಮಾದಸಂಗಸ್ತತ ಏವ ಕರ್ಮಭಿಃ
ನ ಲಿಪ್ಯತೇ ಕಿಂಚಿದುಪಾಧಿನಾ ಕೃತೈಃ .. 99..
ಸ್ವಪ್ನಾವಸ್ಥೆಯು ಜಾಗೃತ ಅವಸ್ಥೆಗಿಂದ ಭಿನ್ನವಾದ ಆತ್ಮದ ವಿಶೇಷ ಅವಸ್ಥೆಯಾಗಿದೆ - ಇದರಲ್ಲಿ ಆತ್ಮವು ಸ್ವಯಂ ಪ್ರಕಾಶಿಸುತ್ತದೆ. ಸ್ವಪ್ನಾವಸ್ಥೆಯಲ್ಲಿ ಬುದ್ಧಿಯು ಜಾಗೃತವಾಗಿರುತ್ತದೆ ಹಾಗೂ ಜಾಗ್ರತವಾಗಿದ್ದಾಗ ಅನುಭವಿಸಿದ ನಾನಾ ಆಸೆಗಳಿಂದ ಅದು ಕರ್ತೃಭಾವದಲ್ಲಿರುತ್ತದೆ. ಈ ಅವಸ್ಥೆಯಲ್ಲಿ ಆತ್ಮವು ಸ್ವಯಂ ಪ್ರಕಾಶಿಸುತ್ತದೆ ಯಾಕೆಂದರೆ ಅದಕ್ಕೆ ಬುದ್ಧಿಯ ಹೊರತು ಬೇರೆ ಉಪಾಧಿಗಳು ಇರುವದಿಲ್ಲ ಹಾಗೂ ಉಪಾಧಿಗಳ ಕೃತ್ಯದಿಂದ ಆತ್ಮ ಕಲುಷಿತವಾಗಿರುವದಿಲ್ಲ.
ಸರ್ವವ್ಯಾಪೃತಿಕರಣಂ ಲಿಂಗಮಿದಂ ಸ್ಯಾಚ್ಚಿದಾತ್ಮನಃ ಪುಂಸಃ .
ವಾಸ್ಯಾದಿಕಮಿವ ತಕ್ಷ್ಣಸ್ತೇನೈವಾತ್ಮಾ ಭವತ್ಯಸಂಗೋಽಯಂ .. 100..ಬಡಗಿಗೆ ಅವನ ಉಪಕರಣಗಳು ಹೇಗೋ ಹಾಗೇ ಈ ಸೂಕ್ಷ್ಮ ಶರೀರವು ಆತ್ಮನ ಉಪಕರಣವಾಗಿದೆ. ಈ ಆತ್ಮ ಸಂಪೂರ್ಣವಾಗಿ ಅಸಂಗಿಯಾಗಿದೆ.
Comments