ವಿವೇಕ ಚೂಡಾಮಣಿ - 151 - 175
ನಿತ್ಯಾನಂದೈಕರಸ: ಪ್ರತ್ಯಗ್ರೂಪ: ಪರ: ಸ್ವಯಂಜ್ಯೋತಿ: . . ೧೫೧ . . .
ಪಂಚಕೋಶಗಳನ್ನು ತೆಗೆದುಹಾಕಿದಾಗ, ಶುದ್ಧನಾದ, ನಿತ್ಯಾನಂದನಾದ, ಏಕರಸನಾದ, ಸರ್ವಂತರ್ಯಾಮಿಯಾದ, ಪರನಾದ, ಸ್ವಯಂಪ್ರಕಾಶನಾದ ಈ ಆತ್ಮನು ಕಾಣಿಸಿಕೊಳ್ಳುತ್ತಾನೆ.
ಅಪವಾದೇ - ತೆಗೆದಾಗ ಪಂಚಾನಾಮಪಿ ಕೋಶಾನಾಮ್ - ಅನ್ನಮಯ ಇತ್ಯಾದಿ ಪಂಚಕೋಶಗಳು
ವಿಭಾತಿ - ಕಾಣಿಸಿಕೊಳ್ಳುತ್ತಾನೆ ಪ್ರತ್ಯಕ್+ರೂಪ: = ಪ್ರತ್ಯಗ್ರೂಪ:
ಆತ್ಮಾನಾತ್ಮ ವಿವೇಕಃ ಕರ್ತವ್ಯೋ ಬಂಧಮುಕ್ತಯೇ ವಿದುಷಾ.
ತೇನೈವಾನಂದೀ ಭವತಿ ಸ್ವಂ ವಿಜ್ಞಾಯ ಸಚ್ಚಿದಾನಂದಂ ..೧೫೨..
ವಿದುಷನು - ಜ್ಞಾನಿಯು ಬಂಧಮುಕ್ತನಾಗಲು ಆತ್ಮ ಅನಾತ್ಮ ವಿವೇಚನೆಯನ್ನು ಮಾಡತಕ್ಕದ್ದು. ಅದರಿಂದಲೇ ಅವನು ತಾನು ಸತ್ ಚಿತ್ ಆನಂದ ಸ್ವರೂಪನು ಎನ್ನುವ ಸತ್ಯವನ್ನು ಅರಿತು, ಆನಂದ ಹೊಂದುವನು.
ಆತ್ಮಾನಾತ್ಮಾ ವಿವೇಕಂ - ಆತ್ಮ ಅನಾತ್ಮ ವಿವೇಚನೆಯನ್ನು
ಕರ್ತವ್ಯೊ - ಮಾಡತಕ್ಕದ್ದು ವಿದುಷಾ - ಪಂಡಿತರಿಂದ ಬಂಧಮುಕ್ತಯೇ - ಬಂಧನದಿಂದ ಬಿಡುಗಡೆಯಾಗಿ
ತೇನೈವಾನಂದೀ - ತೇನ ಏವ ಆನಂದೀ - ಅದರಿಂದಲೇ ಆನಂದ ಹೊಂದಿದವನು
ಸ್ವಂ - ತನ್ನನ್ನು ವಿಜ್ಞಾಯ - ಅರಿತು
ಪ್ರತ್ಯಂಚಮಾತ್ಮಾನಾಮಸಂಗಮಕ್ರಿಯಂ.
ವಿವಿಚ್ಯ ತತ್ರ ಪ್ರವಿಲಾಪ್ಯ ಸರ್ವಂ.
ತದಾತ್ಮನಾ ತಿಷ್ಠತಿ ಯ: ಸ ಮುಕ್ತ: . . ೧೫೩ . . .
ಶ್ಚಾನ್ನೇನ ಜೀವತಿ ವಿನಶ್ಯತಿ ತದ್ವಿಹೀನಃ .
ತ್ವಕ್ಚರ್ಮಮಾಂಸರುಧಿರಾಸ್ಥಿಪುರೀಷರಾಶಿ-
ರ್ನಾಯಂ ಸ್ವಯಂ ಭವಿತುಮರ್ಹತಿ ನಿತ್ಯಶುದ್ಧಃ .. 154..
ಪೂರ್ವಂ ಜನೇರಧಿಮೃತೇರಪಿ ನಾಯಮಸ್ತಿಜಾತಕ್ಷಣಃ ಕ್ಷಣಗುಣೋಽನಿಯತಸ್ವಭಾವಃ .ನೈಕೋ ಜಡಶ್ಚ ಘಟವತ್ಪರಿದೃಶ್ಯಮಾನಃಸ್ವಾತ್ಮಾ ಕಥಂ ಭವತಿ ಭಾವವಿಕಾರವೇತ್ತಾ .. 155..
ಪಾಣಿಪಾದಾದಿಮಾಂದೇಹೋ ನಾತ್ಮಾ ವ್ಯಂಗೇಽಪಿ ಜೀವನಾತ್ .ತತ್ತಚ್ಛಕ್ತೇರನಾಶಾಚ್ಚ ನ ನಿಯಮ್ಯೋ ನಿಯಾಮಕಃ .. 156..
ದೇಹತದ್ಧರ್ಮತತ್ಕರ್ಮತದವಸ್ಥಾದಿಸಾಕ್ಷಿಣಃ .ಸತ ಏವ ಸ್ವತಃಸಿದ್ಧಂ ತದ್ವೈಲಕ್ಷಣ್ಯಮಾತ್ಮನಃ .. 157..
ಶಲ್ಯರಾಶಿರ್ಮಾಂಸಲಿಪ್ತೋ ಮಲಪೂರ್ಣೋಽತಿಕಶ್ಮಲಃ .ಕಥಂ ಭವೇದಯಂ ವೇತ್ತಾ ಸ್ವಯಮೇತದ್ವಿಲಕ್ಷಣಃ .. 158..
ತ್ವಙ್ಮಾಂಸಮೇದೋಽಸ್ಥಿಪುರೀಷರಾಶಾ-
ವಹಮ್ಮತಿಂ ಮೂಢಜನಃ ಕರೋತಿ .
ವಿಲಕ್ಷಣಂ ವೇತ್ತಿ ವಿಚಾರಶೀಲೋ
ನಿಜಸ್ವರೂಪಂ ಪರಮಾರ್ಥಭೂತಂ .. 159..
ದೇಹೋಽಹಮಿತ್ಯೇವ ಜಡಸ್ಯ ಬುದ್ಧಿಃದೇಹೇ ಚ ಜೀವೇ ವಿದುಷಸ್ತ್ವಹಂಧೀಃ .ವಿವೇಕವಿಜ್ಞಾನವತೋ ಮಹಾತ್ಮನೋಬ್ರಹ್ಮಾಹಮಿತ್ಯೇವ ಮತಿಃ ಸದಾತ್ಮನಿ .. 160.
ಬ್ರಹ್ಮಾಹಂ ಇತ್ಯೇವ - ನಾನು ಬ್ರಹ್ಮ ಎಂದು ಸತ್ ಆತ್ಮನಿ - ಸತ್ ಆತ್ಮದಲ್ಲಿ ವಿದುಷ:ತು - ವಿದ್ವಾಂಸನಿಗೆ
ತಾನು ದೇಹ ಎಂದು ಜಡಬುದ್ಧಿಯ ಮನುಜ ತಿಳಿದುಕೊಳ್ಳುತ್ತಾನೆ. ತಾನು ದೇಹ ಮತ್ತು ಜೀವಾತ್ಮ ಎಂದು ವಿದ್ವಾಂಸನು ತಿಳಿಯುತ್ತಾನೆ. ವಿವೇಕವಂತನಾದ ಮಹಾತ್ಮನು ತಾನು ಬ್ರಹ್ಮನೆಂದು ಯೋಚಿಸುತ್ತಾನೆ.
ಅತ್ರಾತ್ಮಬುದ್ಧಿಂ ತ್ಯಜ ಮೂಢಬುದ್ಧೇತ್ವಙ್ಮಾಂಸಮೇದೋಽಸ್ಥಿಪುರೀಷರಾಶೌ .ಸರ್ವಾತ್ಮನಿ ಬ್ರಹ್ಮಣಿ ನಿರ್ವಿಕಲ್ಪೇಕುರುಷ್ವ ಶಾಂತಿಂ ಪರಮಾಂ ಭಜಸ್ವ .. 161..
ಭಜಸ್ವ - ಭಜಿಸು ಕುರುಶ್ವ - ಮಾಡು
ದೇಹೇಂದ್ರಿಯಾದಾವಸತಿ ಭ್ರಮೋದಿತಾಂವಿದ್ವಾನಹಂ ತಾಂ ನ ಜಹಾತಿ ಯಾವತ್ .ತಾವನ್ನ ತಸ್ಯಾಸ್ತಿ ವಿಮುಕ್ತಿವಾರ್ತಾ-ಪ್ಯಸ್ತ್ವೇಷ ವೇದಾಂತನಯಾಂತದರ್ಶೀ .. 162..
ದೇಹೇಂದ್ರಿಯಾದೌ - ದೇಹೇಂದ್ರಿಯ ಇತ್ಯಾದಿ ಅಸತಿ - ಅಸತ್ಯದಲ್ಲಿ ಭ್ರಮೋದಿತಾಂ - ಭ್ರಮೆಯಿಂದ ಹುಟ್ಟಿದ ನ ಜಹಾತಿ - ಬಿಡುವದಿಲ್ಲವೋ ಯಾವತ್ - ಎಲ್ಲಿಯ ತನಕ ತಾವತ್ - ಅಲಿಯ ತನಕ ವಿಮುಕ್ತಿವಾರ್ತಾಪಿ - ಮುಕ್ತಿಯ ಸುದ್ದಿ ಕೂಡ ವೇದಾಂತನಯಾಂತದರ್ಶಿ - ವೇದಾಂತವನ್ನು ಪೂರ್ತಿ ತಿಳಿದವನಾದರೂ
ಎಲ್ಲ ವೇದಾಂತ ತಿಳಿದವನಾದರೂ ಮನುಷ್ಯನು ಎಲ್ಲಿಯತನಕ ಅಸತ್ಯವಾದ ದೇಹೇಂದ್ರಿಯಗಳಲ್ಲಿ ತನ್ನತನ ಬಿಡುವದಿಲ್ಲವೋ, ಅಲ್ಲಿಯ ತನಕ ಮುಕ್ತಿಯ ಸುದ್ದಿ ಕೂಡ ಇರುವದಿಲ್ಲ.
ಛಾಯಾಶರೀರೇ ಪ್ರತಿಬಿಂಬಗಾತ್ರೇಯತ್ಸ್ವಪ್ನದೇಹೇ ಹೃದಿ ಕಲ್ಪಿತಾಂಗೇ .ಯಥಾತ್ಮಬುದ್ಧಿಸ್ತವ ನಾಸ್ತಿ ಕಾಚಿ-ಜ್ಜೀವಚ್ಛರೀರೇ ಚ ತಥೈವ ಮಾಽಸ್ತು .. 163..
ಯತ್ ಸ್ವಪ್ನದೇಹೇ - ಹೇಗೆ ಸ್ವಪ್ನದಲ್ಲಿ ಕಂಡ ದೇಹದಲ್ಲಿ ಹೃದಿ ಕಲ್ಪಿತಾಂಗೆ - ಕಲ್ಪಿಸಿಕೊಂಡ ದೇಹದಲ್ಲಿ
ಯಥಾ ಆತ್ಮ ಬುದ್ದಿ: - ಹೇಗೆ ಆತ್ಮ ಬುದ್ದಿಯು ಕಾಚಿತ್ - ಸ್ವಲ್ಪವೂ ಕೂಡ ಮಾ ಅಸ್ತು - ಇರುವದು ಬೇಡ
ದೇಹಾತ್ಮಧೀರೇವ ನೃಣಾಮಸದ್ಧಿಯಾಂಜನ್ಮಾದಿದುಃಖಪ್ರಭವಸ್ಯ ಬೀಜಂ .ಯತಸ್ತತಸ್ತ್ವಂ ಜಹಿ ತಾಂ ಪ್ರಯತ್ನಾತ್ತ್ಯಕ್ತೇ ತು ಚಿತ್ತೇ ನ ಪುನರ್ಭವಾಶಾ .. 164..
ಪ್ರಭವಸ್ಯ - ಆಗಲು ತತ:ತ್ವಂ - ಆ ಕಾರಣಕ್ಕಾಗಿ ನೀನು ಜಹಿ -ಬಿಡು ತಾಂ - ಅವುಗಳನ್ನು
ತ್ಯಕ್ತೇ - ಬಿಟ್ಟರೆ ನ ಪುನರ್ಭವಾಶಾ - ಪುನ:ಜನ್ಮದ ಆಸೆಯಿಲ್ಲ
ದೇಹವೇ ತಾನು ಎಂಬ ಅವಿವೇಕ ಬುದ್ಧಿಯೇ ಮನುಜರಿಗೆ ಜನ್ಮ-ಮರಣ ಇತ್ಯಾದಿ ದುಃಖಕ್ಕೆ ಮೂಲ ಕಾರಣ. ಹೇಗಾದರೂ ಪ್ರಯತ್ನ ಮಾಡಿ ಅದನ್ನು ನೀನು ಬಿಡು. ಬಿಟ್ಟರೆ ನಿನಗೆ ಪುನಃಜನ್ಮವು ಬಾರದು.
ಕರ್ಮೇಂದ್ರಿಯೈಃ ಪಂಚಭಿರಂಚಿತೋಽಯಂಪ್ರಾಣೋ ಭವೇತ್ಪ್ರಾಣಮಯಸ್ತು ಕೋಶಃ ..ಯೇನಾತ್ಮವಾನನ್ನಮಯೋಽನುಪೂರ್ಣಃಪ್ರವರ್ತತೇಽಸೌ ಸಕಲಕ್ರಿಯಾಸು .. 165..
ಭವೇತ್ ಪ್ರಾಣಮಯಸ್ತು ಕೋಶಃ - ಪ್ರಾಣಮಯ ಕೋಶವಾಗುತ್ತದೆ
ಯೇನ ಆತ್ಮವಾನ್ - ಯಾವುದು ಆತ್ಮವಾನ್ ಅನುಪೂರ್ಣ - ತುಂಬಲ್ಪಟ್ಟು
ಪ್ರವರ್ತತೇ - ಪ್ರವರ್ತಿಸುತ್ತದೆ , ಆರಂಭಿಸುತ್ತದೆ ಅಸೌ - ಅದು
ನೈವಾತ್ಮಾಪಿ ಪ್ರಾಣಮಯೋ ವಾಯುವಿಕಾರೋಗಂತಾಽಽಗಂತಾ ವಾಯುವದಂತರ್ಬಹಿರೇಷಃ .ಯಸ್ಮಾತ್ಕಿಂಚಿತ್ಕ್ವಾಪಿ ನ ವೇತ್ತೀಷ್ಟಮನಿಷ್ಟಂಸ್ವಂ ವಾನ್ಯಂ ವಾ ಕಿಂಚನ ನಿತ್ಯಂ ಪರತಂತ್ರಃ .. 166..
ಜ್ಞಾನೇಂದ್ರಿಯಾಣಿ ಚ ಮನಶ್ಚ ಮನೋಮಯಃ ಸ್ಯಾತ್ಕೋಶೋ ಮಮಾಹಮಿತಿ ವಸ್ತುವಿಕಲ್ಪಹೇತುಃ .ಸಂಜ್ಞಾದಿಭೇದಕಲನಾಕಲಿತೋ ಬಲೀಯಾಂ-ಸ್ತತ್ಪೂರ್ವಕೋಶಮಭಿಪೂರ್ಯ ವಿಜೃಂಭತೇ ಯಃ .. 167..
ಮಮ ಅಹಂ ಇತಿ - ನಾನು ನನ್ನದು ಎಂದು ವಸ್ತು ವಿಕಲ್ಪ ಹೇತು - ವಸ್ತು ವಿಕಲ್ಪಕ್ಕೆ ಕಾರಣ
ಕಲನೋ ಕಲೀತ - ಕಲ್ಪನೆಯಿಂದ ಕೂಡಿದ ಸಂಜ್ಞಾ - ಹೆಸರು ಬಲೀಯಾಂ - ಬಲವಂತವಾದದ್ದು ಅಭಿಪೂರ್ಯ - ಆವರಿಸಿ ವಿಜ್ರಂಭತೇ - ವಿಜ್ರಂಭಿಸುತ್ತದೆ
ಪಂಚೇಂದ್ರಿಯೈಃ ಪಂಚಭಿರೇವ ಹೋತೃಭಿಃಪ್ರಚೀಯಮಾನೋ ವಿಷಯಾಜ್ಯಧಾರಯಾ .ಜಾಜ್ವಲ್ಯಮಾನೋ ಬಹುವಾಸನೇಂಧನೈಃಮನೋಮಯಾಗ್ನಿರ್ದಹತಿ ಪ್ರಪಂಚಂ .. 168..
ವಿಷಯ ಆಜ್ಯ ಧಾರಯಾ - ವಿಷಯ ಎಂಬ ತುಪ್ಪದ ಧಾರೆಯಿಂದ ಬಹು ವಾಸನ ಇಂಧನೈ: - ನಾನಾ ರೀತಿಯ ವಾಸನೆ ಎಂಬ ಇಂಧನದಿಂದ
ಅಗ್ನಿ: ದಹತಿ ಪ್ರಪಂಚಂ - ಬೆಂಕಿಯು (ಮನೋಮಯ ಕೋಶ ಎಂಬ) ಪ್ರಪಂಚವನ್ನು ಸುಡುತ್ತದೆ.
ಪಂಚೇದ್ರಿಯಗಳಿಂದ ಐದು ಅರ್ಚಕರಿಂದ, ವಿಷಯಗಳೆಂಬ ತುಪ್ಪದ ಧಾರೆಯಿಂದ, ನಾನಾ ರೀತಿಯ ಆಸೆಗಳೆಂಬ ಕಟ್ಟಿಗೆಗಳಿಂದ ಪ್ರಜ್ವಲಿಸುತ್ತಿರುವ ಮನೋಮಯವೆಂಬ ಅಗ್ನಿಯು ಪ್ರಪಂಚವನ್ನು ದಹಿಸುತ್ತಿದೆ.
ನ ಹ್ಯಸ್ತ್ಯವಿದ್ಯಾ ಮನಸೋಽತಿರಿಕ್ತಾಮನೋ ಹ್ಯವಿದ್ಯಾ ಭವಬಂಧಹೇತುಃ .ತಸ್ಮಿನ್ವಿನಷ್ಟೇ ಸಕಲಂ ವಿನಷ್ಟಂವಿಜೃಂಭಿತೇಽಸ್ಮಿನ್ಸಕಲಂ ವಿಜೃಂಭತೇ .. 169..
ಮನೋ ಹಿ ಅವಿದ್ಯಾ ಭವಬಂಧ ಹೇತು - ಭವಬಂಧನಕ್ಕೆ ಕಾರಣವಾಗಿರುವ ಅವಿದ್ಯೆ ಮನಸ್ಸೇ
ತಸ್ಮಿನ್ ವಿನಷ್ಟೇ - ಅದು ನಾಶವಾದರೆ ಸಕಲಂ ವಿನಷ್ಟ: - ಎಲ್ಲವೂ ನಾಶವಾಗುತ್ತದೆ
ವಿಜ್ರಂಭತೇ ತಸ್ಮಿನ್ ಸಕಲಂ ವಿಜ್ರಂಭತೇ - ಅದು ವಿಜ್ರಂಭಿಸುತ್ತಿರುವಾಗ ಎಲ್ಲವೂ ವಿಜ್ರಂಭಿಸುತ್ತದೆ
ಸ್ವಪ್ನೇಽರ್ಥಶೂನ್ಯೇ ಸೃಜತಿ ಸ್ವಶಕ್ತ್ಯಾಭೋಕ್ತ್ರಾದಿವಿಶ್ವಂ ಮನ ಏವ ಸರ್ವಂ .ತಥೈವ ಜಾಗ್ರತ್ಯಪಿ ನೋ ವಿಶೇಷಃತತ್ಸರ್ವಮೇತನ್ಮನಸೋ ವಿಜೃಂಭಣಂ .. 170.
ಸ್ವಪ್ನದಲ್ಲಿ ಮನಸ್ಸೇ ವಿಶ್ವವನ್ನು (ನಾನಾ ಸಂಗತಿಗಳನ್ನು) ಸ್ವಯಂ ಸೃಷ್ಟಿಸುತ್ತದೆ. ಜಾಗೃತಾವಾಸ್ಥೆಯಲ್ಲಿ ಕೂಡಾ ಹಾಗೇ. ಹಾಗಾಗಿ ನಾವು ನೋಡುವ ವಿಶ್ವವೆಲ್ಲಾ ಮನಸ್ಸು ರಚಿಸಿದ್ದೇ ಆಗಿದೆ.
ಸುಷುಪ್ತಿಕಾಲೇ ಮನಸಿ ಪ್ರಲೀನೇನೈವಾಸ್ತಿ ಕಿಂಚಿತ್ಸಕಲಪ್ರಸಿದ್ಧೇಃ .ಅತೋ ಮನಃಕಲ್ಪಿತ ಏವ ಪುಂಸಃಸಂಸಾರ ಏತಸ್ಯ ನ ವಸ್ತುತೋಽಸ್ತಿ .. 171..
ಕನಸಿಲ್ಲದ ಗಾಢ ನಿದ್ರೆಯಲ್ಲಿ ಮನಸ್ಸು ಲಯವಾಗಿರುತ್ತದೆ ಹಾಗೂ ಏನೇನೂ ಇರುವದಿಲ್ಲ. ಈ ವಿಷಯ ಸರ್ವವಿದಿತ. ಹಾಗೇ ಮನುಷ್ಯನ ಅಸ್ತಿತ್ವವೆಲ್ಲ ಅವನಿಂದ ಕಲ್ಪಿತವಾಗಿದೆಯೇ ವಿನಃ ನೈಜವಾದುದಲ್ಲ.
ವಾಯುನಾಽಽನೀಯತೇ ಮೇಘಃ ಪುನಸ್ತೇನೈವ ನೀಯತೇ .ಮನಸಾ ಕಲ್ಪ್ಯತೇ ಬಂಧೋ ಮೋಕ್ಷಸ್ತೇನೈವ ಕಲ್ಪ್ಯತೇ .. 172..
ಮೋಡಗಳು ಗಾಳಿಯಿಂದಲೇ ಬರುತ್ತವೆ ಹಾಗೂ ಗಾಳಿಯಿಂದಲೇ ದೂರ ಹೋಗುತ್ತವೆ. ಹಾಗೆಯೇ ಸಂಸಾರ ಬಂಧನವೂ ಮನಸ್ಸಿನಿಂದಲೇ ಕಲ್ಪತವಾಗುತ್ತದೆ, ಮೋಕ್ಷವೂ ಮನಸ್ಸಿನಿಂದಲೇ ಕಲ್ಪಿತವಾಗುತ್ತದೆ.
ದೇಹಾದಿಸರ್ವವಿಷಯೇ ಪರಿಕಲ್ಪ್ಯ ರಾಗಂಬಧ್ನಾತಿ ತೇನ ಪುರುಷಂ ಪಶುವದ್ಗುಣೇನ .ವೈರಸ್ಯಮತ್ರ ವಿಷವತ್ ಸುವಿಧಾಯ ಪಶ್ಚಾದ್ಏನಂ ವಿಮೋಚಯತಿ ತನ್ಮನ ಏವ ಬಂಧಾತ್ .. 173..
ಅದು ಮೊದಲು ದೇಹ ಇತ್ಯಾದಿ ವಿಷಯಗಳಲ್ಲಿ ಅವನನ್ನು ಬಂದಿಸುತ್ತದೆ. ನಂತರ ಹಗ್ಗದಿಂದ ಕಟ್ಟಲ್ಪಟ್ಟ ಪಶುವಿನಂತೆ ಅವನನ್ನು ಕಟ್ಟಿಹಾಕುತ್ತದೆ. ನಂತರ ಅದೇ ಮನಸ್ಸು ಅವನಲ್ಲಿ ವಿಷದಂತೆ ವಿಷಯಗಳಲ್ಲಿ ತೀವ್ರ ಅಸಹ್ಯ ಉಂಟಮಾಡಿ, ಅವನನ್ನು ಬಂಧಮುಕ್ತನನ್ನಾಗಿಸುತ್ತದೆ.
ತಸ್ಮಾನ್ಮನಃ ಕಾರಣಮಸ್ಯ ಜಂತೋಃಬಂಧಸ್ಯ ಮೋಕ್ಷಸ್ಯ ಚ ವಾ ವಿಧಾನೇ .ಬಂಧಸ್ಯ ಹೇತುರ್ಮಲಿನಂ ರಜೋಗುಣೈಃಮೋಕ್ಷಸ್ಯ ಶುದ್ಧಂ ವಿರಜಸ್ತಮಸ್ಕಂ .. 174..
ಆದ್ದರಿಂದ ಮನುಜನ ಬಂಧನಕ್ಕೆ ಹಾಗೂ ಮೋಕ್ಷಕ್ಕೆ ಮನಸೇ ಕಾರಣ. ಮನವು ರಜೋಗುಣದಿಂದ ಮಲಿನವಾದಾಗ ಬಂಧನವುಂಟುಮಾಡುತ್ತದೆ. ಹಾಗೂ ಮನಸ್ಸು ರಜೋ-ತಮೋ ಗುಣಗಳಿಂದ ಮುಕ್ತವಾಗಿ ಶುದ್ಧವಾದಾಗ, ಅದೇ ಮೋಕ್ಷವನ್ನು ತರುತ್ತದೆ.
ವಿವೇಕವೈರಾಗ್ಯಗುಣಾತಿರೇಕಾ-ಚ್ಛುದ್ಧತ್ವಮಾಸಾದ್ಯ ಮನೋ ವಿಮುಕ್ತ್ಯೈ .ಭವತ್ಯತೋ ಬುದ್ಧಿಮತೋ ಮುಮುಕ್ಷೋ-ಸ್ತಾಭ್ಯಾಂ ದೃಢಾಭ್ಯಾಂ ಭವಿತವ್ಯಮಗ್ರೇ .. 175..
ವಿವೇಕ ಹಾಗೂ ವೈರಾಗ್ಯ ಇವೆರಡರಿಂದ ಮನಸ್ಸು ಶುದ್ಧವಾಗಿ ಅದನ್ನು ಮುಕ್ತಿ ಪಡೆಯಲು ಅರ್ಹರನ್ನಾಗಿ ಮಾಡುತ್ತವೆ. ಹಾಗಾಗಿ ಬುದ್ಧಿವಂತನಾದ ಮುಮುಕ್ಷುವು ವಿವೇಕ ವೈರಾಗ್ಯಗಳನ್ನು ದೃಢಗೊಳಿಸಿಕೊಳ್ಳಬೇಕು.
Comments