ವಿವೇಕ ಚೂಡಾಮಣಿ 1-20
ವಿವೇಕ ಚೂಡಾಮಣಿ - ಆದಿ ಶಂಕರಾಚಾರ್ಯರು ರಚಿಸಿದ ಈ ಗ್ರಂಥವನ್ನು ಅದ್ವೈತ ಸಿದ್ಧಾಂತದ ಪ್ರಾರಂಭಿಕ ಗ್ರಂಥವೆಂದು ಹೇಳಬಹುದು. ಪದ್ಯ ರೂಪದಲ್ಲಿರುವ ಈ ಕೃತಿಯು ಶಾರ್ದೂಲ ವಿಕ್ರೀಡಿತ ಛಂದದಲ್ಲಿ ರಚಿತವಾಗಿದೆ. ಈ ಗ್ರಂಥದ ಒಟ್ಟು ಶ್ಲೋಕಗಳ ಸಂಖ್ಯೆ ೫೮೦. ವಿವೇಕ ಎಂದರೆ ವಿವೇಚನೆ , ಚೂಡ ಎಂದರೆ ಶಿಖರ , ಮತ್ತು ಮಣಿ ಎಂದರೆ ರತ್ನ . ಆದ್ದರಿಂದ ಈ ಕೃತಿಯ ಶೀರ್ಷಿಕೆಯ ಅರ್ಥ ' ವಿವೇಕದ ಶಿಖರ-ರತ್ನ'. ಕಿರೀಟದ ಮೇಲಿರುವ ರತ್ನವು ಅತ್ಯಂತ ಎದ್ದುಕಾಣುವ ಆಭರಣವಾಗಿರುವಂತೆ, ಪ್ರಸ್ತುತ ಗ್ರಂಥವು ಅದ್ವೈತ ವೇದಾಂತದ ಕೃತಿಗಳಲ್ಲಿ ಮೇರುಕೃತಿಯಾಗಿದೆ. ವಿವೇಕ ಚೂಡಾಮಣಿಯು ವಿವೇಕ ಮತ್ತು ವಿವೇಚನೆಯ ಬಗ್ಗೆ ಚರ್ಚಿಸುತ್ತದೆ. ವಾಸ್ತವ ಮತ್ತು ಮಾಯೆ ಇವುಗಳ ಅಂತರವನ್ನು ಅರಿಯಲು ಬೇಕಾದ ಜ್ಞಾನವನ್ನು ತಿಳಿಸಿಕೊಡುತ್ತದೆ. ಪ್ರಕೃತಿ ಮತ್ತು ಆತ್ಮ ಹಾಗೂ ಆತ್ಮ ಮತ್ತು ಪರಮಾತ್ಮ ಇವುಗಳ ನಡುವಿನ ಸಂಬಂಧಗಳನ್ನು ವಿವರಿಸುತ್ತದೆ. ಮುಕ್ತಿಯ ಸಾಧನೆಗೆ ಬೇಕಾದದ್ದು ಆತ್ಮ ಜ್ಞಾನವೇ ಎಂಬುದು ಈ ಗ್ರಂಥದ ಮೂಲಸಿದ್ಧಾಂತ. ಬಹುಶಃ ಇದರ ರಚನೆ ಸುಮಾರು ಕ್ರಿಸ್ತಶಕ ಎಂಟನೆಯ ಶತಮಾನದಲ್ಲಿ ಆಗಿರಬಹುದು. (ನಾನು ಶ್ಲೋಕಗಳನ್ನು ಅಂತರ್ಜಾಲದಿಂದ ಎರವಲು ಪಡೆದಿದ್ದೇನೆ. ಕನ್ನಡ ಅನುವಾದದ ಪ್ರಯಾಸ ನನ್ನದು. ಅನುವಾದದಲ್ಲಿ ಏನಾದರೂ ತಪ್ಪಿದ್ದಲ್ಲಿ ಕ್ಷಮೆ ಇರಲಿ.) ವಿವೇಕ ಚೂಡಾಮಣಿ...